Sunday, December 30, 2012

ಕೃತಿ ಸೋಲುತ್ತ ಭಾರತ

ನೀವು ಹೇಗೂ ನಗುತ್ತಲೇ ಇರುತ್ತೀರಿ
ಉಕ್ಕಿಬರುವಂತಾಗಿದೆ ನಮಗೂ ಈಗೀಗ
ನಕ್ಕೂ ಬಿಡಬೇಕೇನೋ ಬಹುಶಃ
ಅದೃಷ್ಟವಶಾತ್
-ಹಿಂದೆ ದುರ್ ಪ್ರತ್ಯಯ
ಬೀಳುವಂತಾಗಿದೆ ಬಹುಶಃ

ಚಿಗುರು ಹೊತ್ತಲ್ಲೇ ಬಂದು ತಲೆತಿಂದತ್ಯಂತಿಕ ತಾತ್ವಿಕ
ಅಪರಿಹಾರ್ಯಗಳ ನಿಭಾಯಿಸಲಾರದೇ ಹೋದ ಸೋಲುಗಳ ಭಾರ
ತಾ ತಾಳಲಾರದೆ ಕುಸಿದಂತೆ ಕೃತಿ ಸೋಲುತ್ತ
ತನ್ನೊಳಗೆಯೇ ಭಾರತ

ನಗುವಿರೇಕಯ್ಯ,
ಮಣ್ಣಾಗುವ ಮುಂಚೆಯೇ
ಮೀಸೆಬೋಳರು ನಾವು
-ಪೂರ್ವಾನ್ವಯ
-ಕತ್ತರಿಸಿ ಜುಟ್ಟು ಜನಿವಾರ ಕಿತ್ತೆಸೆದಿರುತ್ತೇವೆ
ನಾವಿಕ-ನೌಕೆ-ನಕಾಶೆಯೆಲ್ಲ ಸಂಶಯಿಸಿ ಬರಿ
ಈಜಿಯಾತೀರ ಸೇರಿ ತೀರುತ್ತೇವೆಂದು ಇಂದಲ್ಲ ನಾಳೆ
ಇತ್ತಣ ದಂಡೆಯಲೇ ಸಾಯ ಹೊಡೆದಿದ್ದೇವೆ ಹೀಗೆ ಸಾಮದಂಡ
ಮತ್ತು ನಮ್ಮ ಚಿತ್ತಾಗಸದ ವರ್ತಮಾನದಲಿದ್ದದ್ದೇ ಈ
ಉಪಬ್ರಹ್ಮಣ ಉಡ್ಡಯನೋಲ್ಲಂಘನೇತ್ಯಾದಿ ವಿದ್ಯಮಾನ
ವೆನ್ನುವಲ್ಲಿಗೆಯಡ್ಡಡ್ಡ ಉದ್ಧಂಡ
ಬೀಳುವವರೇ ನೀವು ಭಳಿರೇ ! 


ಕುಶಲ ಕಥನಕಾರರು ನಾವು  
ಕತ್ತೆಯುಚ್ಚೆಹೊಯ್ಯುವಂದದಲಿ  ನಮ್ಮದೇ ಕಥನದಲಿ ಸೋಲುತ್ತ
ಭವ್ಯಪರಾಜಯವೆಂದು ಬಣ್ಣಿಸುವ ಸ್ವವಿಮರ್ಶಕರೂ ಕೂಡ,
ಹಾಗೆ ಸೋಲೋಪ್ಪುವರಲ್ಲ ನಾ
-ವೆನ್ನುವಲ್ಲಿಗಿನ್ನೇನಂತೆ ಬಂದುಬಿಡಿ ನಮ್ಮ ಹಿಂದುಹಿಂದಕ್ಕೆ
ಉಘೇ ಉಘೇ ಎಂದೆಂದುಗಿಯುತ್ತ...




-----------------------------------------------------------
ಸಾವಯವ ಸವ್ದು ಸಾಯ್ಲಿ , ಶಿಲ್ಪ ಎಲ್ಲಿದ್ದಾಳ್ರೀ ..!