------------------------ ಕಾಲ್ನುಡಿ: ಆನೆ ನಡೆದುದೇ ದಾರಿ -ಹೌದೋ!? ವಾಹನವಾಗಿಲಿ
ಮಾತ್ರ -ಏಕೆ ಬೇಕಾದುದದೊ?! ಎದುರಲೊಂದಿಲಿ ತಲೆ -ಕುಣಿಸುತಣಕಿಸುತಿರೆ ಮಾತ್ರ
ಚಲಿ..ಸೊ ಸೊ ಸೊ -ಸೋಮಾರಿಯಾನೆ ಸೈಯ!!!
-------------------------------------------------------- (ಬೇಕೆನಿಸಿದರೆ), ಬೇಸಿಯನ್ (Bayesian) ಸಂಖ್ಯಾಶಾಸ್ತ್ರಜ್ಞರ ಬಗೆಗೆ ತುಸು ತಾಂತ್ರಿಕ ಕಿರುಪರಿಚಯ:
ಬೇಸಿಯನ್ನರ ಜಾಯಮಾನವೆಂದರೆ ಪ್ರಾಯೋಗಿಕವಾಗಿ ಘಟನೆ (event) ಗಳ ಪುನರಾವರ್ತನೆಗಳ ಅಂಕಿಅಂಶಗಳನ್ನು ಗಮನಿಸಿ ದಾಖಲಿಸಿಕೊಳ್ಳುತ್ತಾ, ಆ ಆಧಾರದಲ್ಲಿಯೇ ಅವುಗಳ ಸಂಭವನೀಯತೆ (probability)ಯನ್ನು ಲೆಖ್ಖಿಸುತ್ತ ಹೋಗುವುದು. ಆ ಆಧಾರದಲ್ಲಿಯೇ ಘಟನೆಗಳ ಸಂಭವನೀಯತೆಗಳ ವಿತರಣಾಯಾದಿ (probability distribution) ಗಳ ರೇಖಾನಕ್ಷೆ (graph / plot) ಗಳನ್ನು ರೂಪಿಸಿಕೊಳ್ಳುತ್ತ, ಅವುಗಳ ಕುರಿತು ಊಹಾಸಿದ್ಧಾಂತ (hypothesis) ಗಳನ್ನು ಮಾಡಿಕೊಳ್ಳುತ್ತಾ ಹೋಗುವುದು. ಹೊಸ ದತ್ತಾಂಶಗಳು ಸಿಗುತ್ತ ಬಂದಂತೆಲ್ಲ ಹಳೆಯ ಊಹೆಗಳನ್ನು ನವೀಕರಿಸಿಕೊಳ್ಳುತ್ತಾ ಸಾಗುವುದು (updating the priors) . ಆ ಆಧಾರದಲ್ಲಿ ಆಯಾ ಬಗೆಗಿನ ಪ್ರಯೋಗಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡು ಬರುವುದೇನು (typicality) , ಅಪರೂಪಕ್ಕೆ ಕಂಡು ಬರುವುದೇನು (atypicality, rare-events, large-deviations, tail-ends of distributions...) ಎಂಬಿತ್ಯಾದಿ ಒಳನೋಟಗಳನ್ನು ಬೆಳೆಸಿಕೊಳ್ಳುತ್ತಾ ಸಾಗುವುದು...
ಯಾವುದೇ ಘಟನೆಗಳ ಸಂಭವನೀಯತೆಗಳು ಮೇಲೆ ಹೇಳಿದಂತೆ ಪ್ರಯೋಗಸಿದ್ಧವಾಗುವ ದತ್ತಾಂಶಾಧಾರಿತ ತಥ್ಯಗಳಾಗಬಲ್ಲವೇ ವಿನಾಃ, ಪ್ರಯೋಗವಾಗುವುದಕ್ಕೂ ಮುನ್ನವೇ -ದತ್ತಾಂಶ ದೊರಕುವುದಕ್ಕೂ ಮುನ್ನವೇ- ಇನ್ನು ಹ್ಯಾಗೋ ಸೈದ್ಧಾಂತಿಕವಾಗಿ ಪೂರ್ವನಿರ್ಧಾರಿತವಾಗಿರಬಲ್ಲ ಮೂಲಭೂತ ತಥ್ಯಗಳಲ್ಲ ಎಂಬುದು ಬೇಸಿಯನ್ ಸಂಖ್ಯಾಶಾಸ್ತ್ರಜ್ಞರ ಅತಿಮುಖ್ಯ ಧೋರಣೆ..
--------------------------------------------------------------------------------------- ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು. ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ. =================================================
ತನ್ನದೇ ರಂಗು ರಂಗ ಭಂಗಿ ಹಂಗಿಲ್ಲ ಲಜ್ಜಿ ಒಜ್ಜಿ ಹೆಜ್ಜಿ ಕುಣಿದಾಳು ಥಕ ಥೈ ಥೈ ಗೆಜ್ಜಿ ನರ್ತಿಸುತ್ತ ಸುತ್ತಿ ಸುತ್ತಿ ಸುತ್ತಿ ಹೋದಳು ಸುಳಿಗಾಳಿ ಹಾಂಗ
ಹವಾ ಹವಾ ಹ್ಹೊ ರಾಣಿ ಹವಾ ಪಾದ ನಿಲ್ಲಲ್ಲ ... ನಿಲ್ಲೊಲ್ಲ ಯಾರಪ್ಪಣೆಗೂ ಇವು ಸುತ್ತುತಾವೆ ಕುಣಿಯುತ್ತಾವೆ ಅಲ್ಲಿ ಇಲ್ಲಿ ಎಲ್ಲಿ ಎಲ್ಲೆಲ್ಲು ಪಾದ ಚಕಚಕಚಕ ಚಮಕೀ ಚುಕ್ಕಿ ಚಮಕೀ ಚುಕ್ಕಿ ಚಮಕೀ ಚುಕ್ಕಿ
ಹವಾ ಹವಾ ಹವಾ ಹವಾ ಹವಾ ಹವಾ
===================================== ಇಲ್ಲಿ ಪ್ರಸ್ತುತಿಯಾಗಿರುವ ಯೂರೋಪಿನ ಹಳೇ ಜನಪದ ಕಥೆ: ಒಂದಾನೊಂದು ದೇಶಕಾಲದಲ್ಲಿ ಓರ್ವ ರಾಜ ಚಿಂತಾಕ್ರಾಂತನಾಗಿದ್ದಾನೆ. ಅವನ ಮಗಳು ಯುವರಾಣಿಯ ಡಜನ್ ಚಿನ್ನದ ಬೂಟುಗಳು ಅದು ಹೇಗೋ ಪ್ರತೀ ರಾತ್ರಿ ಸವೆಯುತ್ತಿವೆ. ಏನು ಮಾಟಮಂತ್ರವೋ ಏನೋ.. ರಾತ್ರಿ ಅವಳು ಡಜನ್ ಬೂಟುಗಳನ್ನು ಕೊಳಾಯಿಸಿ ಹಾಗೆ ಗುಟ್ಟಾಗಿ ಎಲ್ಲಿಗೋ ಹೋಗುತ್ತಿದ್ದಾಳೋ ಏನೋ.. ಯಾರನ್ನೋ ಕೂಡುತ್ತಿದ್ದಾಳೋ ಮತ್ತಿನ್ನೇನೋ.. ಅದೇನು ಕಥೆ ಎಂಬುದನ್ನು ಪತ್ತೆಮಾಡಲು ಅದ್ಯಾಕೋ ಬಂದ ಯಾವ ಜಾಸೂಸಿ-ಖಬರಿಗಳಿಂದಲೂ ಸಾಧ್ಯವಾಗುತ್ತಿಲ್ಲ.... ಕೊನೆಗೆ ನಮ್ಮ ಹೀರೋ--ಒಬ್ಬ ಹದಿಹರೆಯದ ಹೊಸ ಸೈನಿಕ--ಎಂಟ್ರಿ ಕೊಡುತ್ತಾನೆ. ಅವನ ಬಳಿ ಯಾವುದೋ ಜಕ್ಕಿಣಿ ಇನ್ನೊಂದಾವುದೋ ಕಥೆಯ ಕೊನೆಗೆ ಮೆಚ್ಚಿ ಹರಸಿ ಕೊಟ್ಟ ಕೆಲವು ಮಾಂತ್ರಿಕ ಕೊಡುಗೆಗಳಿವೆ. ಅದರಲ್ಲಿ ಅವನನ್ನು ಅದೃಶ್ಯ ಮಾಡಬಲ್ಲ ಒಂದು ಮಾಯಾಟೋಪಿಯೂ, ಯಾವುದೇ ಲೋಕದಲ್ಲಿಯೂ ದಾರಿ ತೋರಿಸಬಲ್ಲ ಒಂದು ಮಾಯಾದಂಡವೂ, ಮತ್ತಿನ್ನೇನೇನೋ ಎಲ್ಲ ಇವೆ... ಹಾಗೊಂದು ರಾತ್ರಿ ಕಾವಲಿಗಿದ್ದ ಇವನಿಗೆ ಮತ್ತು ಬರಿಸುವ ವೈನ್ ಕೊಟ್ಟು ಅವಳು ಒಂದು ಗುಪ್ತ ಭೂಗತ ಲೋಕಕ್ಕೆ ತೆರಳುತ್ತಾಳೆ. ಅದನ್ನು ಕುಡಿದು ಬಿದ್ದಂತೆ ಹುಸಿ ನಟಿಸಿದ ಅವನು, ಜಾಗರೂಕತೆಯಿಂದ ಅದೃಶ್ಯರೂಪದಲ್ಲಿ ರಾಜಕುಮಾರಿಯನ್ನು ಹಿಂಬಾಲಿಸುತ್ತಾನೆ. ಆ ಹಾದಿಯಲ್ಲಿ ಅವನು ಕ್ರಮವಾಗಿ ಬೆಳ್ಳಿ, ಬಂಗಾರ, ಮತ್ತು ವಜ್ರಗಳ ಮೂರು ಕಾಡುಗಳನ್ನು ನೋಡುತ್ತಾನೆ.. ಹುಶಾರಾಗಿ ಕೆಲವು ಸಾಕ್ಷ್ಯಗಳನ್ನೂ ಸಂಗ್ರಹಿಸುತ್ತಾನೆ. ಆ ಕೊನೆಯಲ್ಲಿ ಅವಳು ತನ್ನ ಹನ್ನೆರಡು ಜೋಡಿ ಬೂಟುಗಳು ನಜ್ಜುಗಜ್ಜಾಗುವವರೆಗೆ ಒಂದು ದಯ್ಯದೊಂದಿಗೆ ಅಗ್ಗಿಷ್ಟಿಕೆಯ ಸುತ್ತ ನರ್ತಿಸುವ ಭಯಂಕರ ದೃಶ್ಯ ನೋಡುತ್ತಾನೆ. ಜಾಗರೂಕತೆಯಿಂದ ಸಾಕ್ಷ್ಯಗಳೊಂದಿಗೆ ಅಲ್ಲಿಂದ ಸುರಕ್ಷಿತವಾಗಿ ಮರಳಿ, ರಾಜನಿಗೆ ಇದನ್ನೆಲ್ಲಾ ವರದಿ ಮಾಡುತ್ತಾನೆ. ಶಿಕ್ಷೆಯಾಗಿ ರಾಜನು ಆ ರಾಜಕುಮಾರಿಯನ್ನು ಅರಮನೆಯಲ್ಲೇ ಗೃಹಬಂಧನದಲ್ಲಿರಿಸಲು ಬಯಸುತ್ತಾನೆ. ಆದರೆ ರಾಜಕುಮಾರಿ ರಾಜನಿಗೆ ತಾನು ಅರಮನೆಯನ್ನೇ--ಅಂದರೆ ಸಿಂಹಾಸನದ ಮೇಲಿನ ತನ್ನ ಹಕ್ಕನ್ನೇ ತ್ಯಜಿಸುತ್ತೇನೆ ಎನ್ನುತ್ತಾಳೆ. ಬದಲಿಗೆ ನೃತ್ಯ ಮಾಡುವ ತನ್ನ ಸ್ವಾತಂತ್ರ್ಯವನ್ನ ಬೇಡುತ್ತಾಳೆ. ನೋಡುನೋಡುತ್ತಿದ್ದಂತೆಯೇ ಅವಳು ನರ್ತಿಸುತ್ತ ಹೊಗೆಸುರುಳಿಯಂತೆ ಗಾಳಿಯಲ್ಲಿ ಕರಗಿ ಮಾಯ!
ಕೊಸರು: ನೆನಪುಗಳು ಬಲು ಖತರ್ನಾಕು ಕಣ್ರೀ! ಹಿಂದಿನ ದಶಕದಲ್ಲಿ ನಾವುಗಳೂ ಮತ್ತು ನಮ್ಮ ಶ್ರೀಮಾನ್ ಪುರೋಹಿತರೂ ಒಂದು ಸಮ್ಮೇಳನದ ನೈಮಿತ್ಯದಲ್ಲಿ ಒಟ್ಟೊಟ್ಟಿಗೆ ಪ್ರಾಹದಲ್ಲೆಲ್ಲಾ ನೋಡಾಡಿಕೊಂಡು ಬಂದವರು, ಅದರದೆಲ್ಲಾ ಫೋಟೋ-ವೀಡಿಯೋ ಕೇಳಿದವರಿಗೆ ಮಾತ್ರ ಉಲ್ಟಾ ನಕರಾ ಹೊಡೀತಿದ್ದೆವು. "ಹೋಗಿಬಂದ ನಮ್ಮ ಶಿಫಾರಸಿನ ಮೇರೆಗೇ ಪ್ರಾಹದಲ್ಲಿಯೇ ಈ 'ಕಲ್ಲತಾರೆ'ಯ ಗಾಥೆಗಳ ಚಿತ್ರೀಕರಣವಾಗಿದೆ.. ಈ ಗೀತಗಳನ್ನು ಯೂಟ್ಯೂಬಿನಲಿ ನೋಡಿದರೆ ಸಾಕು! -- ನಮ್ಮನ್ನು ಫೋಟೊ ವೀಡಿಯೋ ಎಂದು ಕೇಳದಿರಿ.." -- ಎಂದು ಒಂದಿಷ್ಟು ಕಾಲ ಪುಂಗಿದ್ದೆವಂತ ನೆನಪು. ಈಗ ನೋಡಿದರೆ, ಅರೆ ಆ ಸಿನಿಮಾ ಬಂದದ್ದು ನಮ್ಮ ಪ್ರಾಹ ಭೇಟಿಗೂ ೩ ವರ್ಷ ಮುಂಚೆಯೇ! ಹಾಡುಗಳು ಬಿಡುಗಡೆಯಾದಾಗಲೇ ಒಂದೇಟಿಗೇ ಅಭಿಮಾನಿಗಳಾಗಿದ್ದು ಸ್ಪಷ್ಟ ನೆನಪು. ಆದರೂ ಹೀಗೇಕೆ ಕರ್ರಪ್ಟಾಗಿದೆಯಲ್ಲ ನಮ್ಮ ಮೆಮೊರಿ ಕಾರ್ಡು...!
ಜಗತ್ತಿನಲೆಂದೂ ಎಂದೂ ಯಾವ ಎಐ ಬಂದರೂ ಅಷ್ಟೇ ಅವುಗಳಿಗೇನೇ ತಲೆಕೆಳಗು ಪ್ರಾಂಪ್ಟಿಂಜಿನೀರು ಕುಡಿಸಿದರೂ ಅಷ್ಟೇ ಅವು ಇಂಥ ಮಿನಿ world-flay ಒಂದನೆಂದೂ ಬರೆದುಕೊಡಲಾರವು ಅಂತಂತಂದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳಾದ ನಾವುಗಳು ಈ ಮೂಲಕ ಶರಂಪರ ಪರಾಶರಪರಂಪರಾಪರಪರ ಪರಪರ ಷರಾ ಬರೆದಿಡುತಿದ್ದೇವೆ.
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳ ಚಿತ್ತಭಿತ್ತಿ- ಯ ಹಿನ್ನೆಲೆಯಲ್ಲಿರುವುದು ಟ್ಯೂಬ್ಲೈಟಿನ ಪ್ರಭಾವಳಿಯೇ!?!
ವೇದಮಂತ್ರಗಳ ಪುಷ್ಪಗಳನ್ನು ವ್ಯಾಪಕವಾಗಿ ಕಿವಿಯ ಮೇಲೆ ಇರಿಸುವ ವಾತಾವರಣದಲ್ಲೇ ಬೆಳೆದ ಇತಿ ಶ್ರೀಗಳಿಗೆ ಪ್ರಾಯಶಃ ಅಂಥಾ 'ಭಾಗ್ಯ'ವಿಲ್ಲದೆಯು ಬೆಳೆಬೆಳೆದಿರಬಹುದಾದ ಶ್ರೀಮನ್ಮಹಾ ರಾಜೇಂದ್ರರೇ "ಚಂದ್ರ ನೀರ ಹೂ" ಎಂದು ಪ್ರಸಾದಿಸಿದ ಮೇಲಷ್ಟೇ "ಚಃದ್ರಮಾವಾ ಅಪಾಂ ಆಯತನಂ" ಎಂಬ ಮಂತ್ರಪುಷ್ಪದ ಕಾವ್ಯಾಯತನವು ಅಪ್ಯಾಯಮಾನವಾಂಗಿದ್ದು!
ಎಂದು ಬಂದದ್ದು... ಛೇ... ಬರೀ ಅನು-ವಾದನ ಕಲ್ಪನಾ-ವಿಲಾಸವೇ..?
ಮಕ್ಕೀ-ಕಾ-ಮಕ್ಕೀಯಲ್ಲ ಎಂದರೆ ಉಘೇ ಉಘೇ ಎಂಬವರು ಭೃಂಗಕ್ಕ-ಭೃಂಗ ಎಂದರೂ ವ್ರತಭಂಗವಾದಂತೆ ಮತ್ತೆ ಮಕ್ಕುಗಿವುದಿಲ್ಲ ಎಂದೇನು ಗ್ಯಾರಂಟಿ!?!
ಹೋಗಲಿ, ಟ್ಯೂಬ್ ಲೈಟ್ ಕೊನೆಗೂ ಹತ್ತಿತೇ ಎಂದು ನೋಡಿದರೆ ಹತ್ತಿದ್ದೂ ಸಹ ವೊಲ್ಟೇಜು ಪೂರ್ತಿಯಿರದೇ ತುಸು ಮಂದವಿರುತ್ತದೆ!
ಮಕ್ಕಳಾಟದಿ "ಸುಬಃ ಶಾಮ ರಾತ್ ಮೆರೆ ಖಾಯೆ ಲಾತ್ ವೊ ಯಾರು ಮೆರಾ ಸೈಯ್ಯಾ ಸೈಯ್ಯಾ..!" ಎಂದು ಅಣಕುವಾಡು ಗುನುಗಿ ಛೈಯ್ಯ ಛೈಯ್ಯ ಎಂದು ಕುಣಿದು ದಶಕವಾದ ಮೇಲೆ ಅದರಲ್ಲಿ ರಹಮಾನನ ಮೇಘರಾಗಮಾಲೆಗಳ ಬಂಡಿಯ ಮಾನ್ಯತೆ ಮನ ದಟ್ಟಾದದ್ದು... ಮತ್ತೊಂದು ದಶಕವಾಗುವ ಹೊತ್ತಿಗೆ ಅದರ ಸುಖೀ ಗಾಯಕಿಯ ಹುಕಿ ಹುದುಗಿ ಬಂದಿದ್ದು... ಮತ್ತೊಂದರ್ಧ ದಶಕವಾಗುವಾಗ ತತ್ಸಂಬಂಧ ಗುಲ್ಜಾರನ ಸಂದರ್ಶನಗಳ ಸಂದರ್ಶಿಸಿದ್ದು... ನಿಧಾನ ನಮಗೆ ಈ ಸಾಲುಗಳಲ್ಲಿ ಇನ್ನೇನೇನೋ ಇದ್ದಿರಲಿಕ್ಕೇ ಸೈಯ್ಯಾ! ಎನಿಸ ತೊಡಗಿದ್ದು.. ಇವತ್ತು ಧಿಗ್ಗನೆ ಎದ್ದು ಯಾವ್ಯಾವುದೋ ಗುಂಗು ಗುಂಗುಗಳಲ್ಲಿ ಈ ಹಾಡಿನ ರಂಗು ರಂಗಾದ ಪಲಕು ಪಲಕುಗಳ ಪದರ ಪದರಗಳು ಲೇಯರ್ಡ್ ಕೇಕಿನಂತೆ ಅನುವಾದನ ವ್ಯಾಸಪೀಠಾರೋಹಿಸಿದ್ದು...
ಸೊ, ಇದನು ಮೂಸಿ ಮೂಸಿ ನಿಮ್ಮ ಎದೆದುಂಬಿದನ್ನು ನೀವು ಸಹ ನಮ್ಮತ್ತ ಪುನಃ ಸೂಸಿ ಬಿಡಿ!
ಪ್ರತಿಮಾನಾಟಕದಾಭಾಸದೀಜಗದಲ್ಲಿ ಶಾಂತಿಪ್ರಿಯವೆಂದು ಬಣ್ಣಿಸಲಾದ ಮತಧರ್ಮವೊಂದರದ್ದು ಹಾವಳಿಯೆಂದು ಅಶಾಂತಗೊಂಡ ಕೆಲವರು ಅದಕ್ಕೆ ಟಾಂಗುಕೊಡಲೆಂದು ಎದುರುಮಾಡಿಕೊಂಡಿದ್ದಾದರೋ ಸುಶಾಂತಮೂರ್ತಿ ಎಂದು ಪರಿಭಾವಿಸಾಗಿರ್ದ್ದವನು ಶ್ರೀರಾಮಚಂದಿರ... ಅಲ್ಲವೆ...
ಯುಗಯುಗಾದಿ
ಕಳೆದು ಯುಗಾದಿ ಮರಳಿಬರುವ ಚಕ್ರದಲ್ಲಿ ಯುಗಾದಿಯ ನವದಿನಗಳಿಗೆ ರಾಮನವಮಿಯೂ
ಆಗುತ್ತಲ್ಲವೆ.. ಅಥವಾ ಪಶ್ಚಿಮದ ಮಾರ್ಜಾಲರಾಮನ ನವಹುಟ್ಟುಗಳ ಚಕ್ರ ಎನ್ನಿ.. ಒಟ್ಟಿನಲ್ಲಿ ಯಾವುದೋ ಒಂದು ಚಕ್ರಾರ ಪಂಕ್ತಿ. ಅಲ್ಲವೇ...
ತರುವಾಯ
ಅಸಲು ವಿಷಯವೇನೆಂದರೆ, ಅಡಿಗರ 'ಶ್ರೀರಾಮನವಮಿಯ ದಿವಸ'ಕ್ಕೆ ಅಂತರ್ಜಾಲದಲ್ಲಿ ಸಧ್ಯ
ಅಪ್ಲೋಡಾಗಿರುವ ವಿವರಣೆಗಳನ್ನ ನೋಡಿದಾಗ ಇಲ್ಲಿನ ಈ 'ಚಕ್ರಾರ ಪಂಕ್ತಿ' ಎಂಬುದನ್ನ ನಮ್ಮ
ಕನ್ನಡದ ಪ್ರಸಿದ್ಧ ಅಧ್ಯಾಪಕರು ವಿಮರ್ಶಕರು ಕವಿಗಳು ಇತ್ಯಾದಿಗಳು ಸರಿಯಾಗಿ ಶಬ್ದಶಃ
ಅರ್ಥಬಿಡಿಸದೇ.. ಬಿಡಿಸಿನೋಡದೇ.. ನೋಡಿ ಅರಿಯದೆ.. ಅವಸವಸರವಾಗಿ ಜಾರಿಕೊಂಡಂತೆ....
"ಚಕ್ರದಂತೆ ಉರುಳುವ ಕಾಲ ಅಥವಾ ವಿಕಾಸವಾದದ ಚಕ್ರವನ್ನು (ಚಕ್ರಾರ) ಸಾಲಾಗಿ (ಪಂಕ್ತಿ)
ಜೋಡಿಸಿದಂತೆ, " ಅಂತೇನೋ ಗೊಣಗಿ ತಪ್ಪಿಸಿಕೊಳ್ಳುವಂತೆ ಕಂಡುಬರುತ್ತಿದೆ...
ಚಿಂತಿಸಬೇಡಿ! ನಾವಿದ್ದೇವಲ್ಲ!! -ಎಂದು ಈ ಕೆಳಗಿನಂತೆ ಅಪ್ಪಣೆಕೊಡಿಸಿದ್ದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು!!!
ಈ
ಪದಪುಂಜ ನೋಡಿದ ಮೊತ್ತ ಮೊದಲ್ಮೊದಲಲ್ಲಿ ಶ್ರೀ^3 ನಾವುಗಳ ಚಿತ್ತದಲ್ಲಿ ಮೂಡಿದ ಚಿತ್ರ ಎಂದರೆ
ಅದು "ಅರೆಯುವ ಹಲ್ಲುಗಳಿರುವ ಚಕ್ರದ (=gears) ದಂತಪಂಕ್ತಿಗಳ ಅರೆಯುವ ಆಕ್ಷನ್.."
ನದ್ದು.. ಆ ರೀತಿಯಲ್ಲಿ ಚಕ್ರ+ಅರ++ಪಂಕ್ತಿ ಅಂತ ಮೊದಲನೇಯ ತರಹದ ಸಮಾಸ ನಿಷ್ಪತ್ತಿ
ಎಂದೊಂದಪ್ಪಣೆ.
ಹಾಗೆ ಚಕಮಕಿಕಲ್ಲುಗಳನ್ನೇ ಅರೆಯುವ ಹಲ್ಲುಗಳನ್ನಾಗಿ ಹೊಂದಿರುವ
ಗಿಯರ್-ಚಕ್ರ ಗಳು ಪಕ್ಕ ಪಕ್ಕ ಒಂದನ್ನೊಂದು ಉಜ್ಜಿಕೊಳ್ಳುತ್ತಾ ಕಿಡಿ ಹೊತ್ತಿಸುತ್ತ
ತಮ್ಮ ಮಧ್ಯೆ ಸಿಲುಕಿದುದನ್ನು ಅರೆಯುತ್ತ ಕೂಡವಿರುವ ಯಂತ್ರ-ಇಸಂ ಭರಿತ ದೃಶ್ಯ
ಅಂದುಕೊಂಡರೆ ಅದು ಅಲ್ಲಿನ ರಾಕ್ಕೆಟ್ಟುಗಳ ಶೋಕೇಸಿಗೆ ಸೇರಿಕೊಳ್ಳುತ್ತೆ... ಹಾಗೆ
ಚಕ್ರವ್ಯೂಹದ ದಂತಭಗ್ನಕ್ಕೆ ಈಡಾದ ಅಭಿಮನ್ಯು ಕಥೆಗಳೂ ನೆನಪಾದರೆ ಹೋಗಲಿ ಎನ್ನುವ... 'ತುರಿಮಣೆ' = 'dentally forward' ಎನ್ನುವ ಬೂಮರ್ರಾಂಗಪಾರ್ಥ ಕೂಡ ನೆನಪಾಗಿ ಬಿಟ್ಟರೆ, ವಿಧಿ ಇಲ್ಲದೇ, ಥೂ ಬಿಡ್ತೂ ಅನ್ನೀಪ್ಪಾ👻
ಮತ್ತಷ್ಟು ವರುಷಗಳುರುಳಿದಂತೆ ವರ್ತನೆ ಗಳುರುಳು ತಲೆಗುಸಿರು ಗಟ್ಟಿ ಗಟ್ಟಿ ಗಟ್ಟಿಸುತಬಂದು ಕೊನೆಗೂ ತೊಡೆ ಗಣಕವನೆತ್ತಿಕೊಂಡು ತಾನು ತಾನಾಗದೆ ಗಂಟಿಕ್ಕಿ ಹುಬ್ಬು ಮಧ್ಯೆ ಮಧ್ಯೆ ಮೆದ್ದಾಗೆರಡೆರಡೆಲೆ ನಾಕು ನಾಕಾಗೆಂಟೆಂಟಾಗುವಾಟ ಗಂಟುಗಂಟಾಗಿ ಕೆಲಸವಿದೇ ಕಾರ್ಯವಿದೇ ಎಂಬಂತೆ ಗಂಟೆ ಕಳೆ ವೇಷ ಗಂಟುಕಟ್ಟೋವರೆಗೆ ಮುಖ ವುಳಿಸುವಾಟದಂತೆ ಮೇಲ್ನೋಟಕ್ಕೆ ತಾಗದಂತೆ ಒಳಗೊಳಗೇ ಕುದಿಯುತ್ತೆ ಆಖೈರು ತಿದಿಯೊಂದು ಹಾಗೇ ಮುಂದರಿ ಯುತ್ತ ಹೇಗೆ ಯಿನ್ನು ನಾ ಫಿಸಿಕ್ಸು ಲಾಜಿಕ್ಕು ಫಿಲಾಸಫಿ ಸುವುದಂತ ಚಿಂತೆ ಅದೇ ಸರಪಳಿ ಯಲಿ ಸರಿ ಸರಿ ಸರಿಯುತ್ತ ಹಾಳಾಗಲಾ ಒಂದಿಷ್ಟು ಪದಶ್ಲೇಷೆಗಳದೇನೇನಕೋ ಹೀಗೆ ತಲೆಗ್ಹಿಡಿಸುತ್ತದಂತ ಸಿಂಟ್ಯಾಕ್ಟಿಕ ಭಂಗಿ ಭಂಗಿಸಿದಂತೆ ಯಂತ ಯಂಥದ್ದೆಲ್ಲವರ್ಥ ಅರ್ಥಾರ್ಥ ಅಪಾರಾರ್ಥವಾಪಾರ್ಥ ವಾಪಥ್ಯ ಸೀಮಾಂತೆಕ್ಕಿನ ಮಟ್ಟದಲಂತೂ ತಲೆ ಕುಣಿಸುತ್ತೆ ಮತ್ತದೇ ಧಾಟಿಯ ಸಾವಿರ ಪದ ನೆನೆ ನೆನೆಸಿ ಹುದುಗುಬರಿಸುತ್ತೆ ಮತ್ತೇರಿಸುತ್ತ ಶೆರೆ ಸೆರೆ ಅರರೆರೆ ಮತ್ತೆ ಮಾತ್ರೆಗಳೆರಡೆರಡೆಲೆಲೆ ನಾಕುನಾಕಾಗೆಂಟೆಂಟಾಗು ವಲ್ಲಿಗೆ ಪದಪದ ಹೊಸೆವೆಸೆವಾಟಮಾಟ ಹೊಸವೆ ನಿಸಲು ಮತ್ತದೆ ಶಾಬ್ದಿಕ ಬೌದ್ಧಿಕ ಜಿಮ್ನಾಸ್ಟಿ ಕಾಟವೆ ಮತ್ತೆ ಇಷ್ಟಕ್ಕೂ, ಹಃ! ಆಧುನಿಕೋತ್ತರ ಜೀವ ಜೀವನವೆಂದರೇನೊ? ದಾರಿಹೋಕ ಹೂ ಮಾರ್ವ ಜೀವ ದರ್ಶನಕ್ಕಿರುವಲ್ಲಿಗೆ, ಸಾಂಪ್ರದಾಯಿಕ ಮಾರ್ ಜಾಲನಿಗೂ ನವ ಜೀವನವೆನುವಲ್ಲಿಗೆ! ಕಾರಿ ಕಾರಿ ಬರೆ ಭಾವ ಸಾರಿಕೆ ಬರೆದು ಕೊರೆದು ವಕಾಲತ್ತಿಸಿ ವೈಭವೀ ಕರಿಸಿ ವಿಸರ್ಜಿಸು ವಾಟಕ್ಕೆ ವಾಕರಿಸದೆ ಯಾರಿಗ್ಗೊತ್ತಿಲ್ಲ ದುತ್ತರವೀ ಜಗ ದಗಲಕ್ಕೆ ಪ್ರಶ್ನೆ ಹುಡುಕೋ ತರ್ಕಮರ್ಕಟ ಕಂಟ್ರಿ ನಾ ಯೀ ಬಾಲ ಬುದ್ದಿ ವಾತ ಬಿಡಿ ಬಡಿಯುತ್ತೆ ಹೇಗೂ ಕೊನೆಗೊಮ್ಮೆ.
================================================
ಆತ್ಮೀಯ bondhuಗಳೇ, ಮೊನ್ನಿತ್ತೀಚೆಗೆ ನಾವೇನು ನಿಮ್ಮ ಜೊತೆ ಬಿಹೇವಿಯರಿಸಂ ವೇಷಗಟ್ಟುವಿಕೆಯ ಬಗೆಗೆ ಗಂಟೆಗಂಟಲು ಅವಲೋಕಿಸಿದೆವೋ .. ನಮ್ಮ ಆಧುನಿಕ ಕವಿಕಾವ್ಯೋದ್ಯೋಗರಹಸ್ಯವನ್ನು ಆಟೊರಿಕ್ಷಾಟನೆಯಲ್ಲಿ ಕತ್ತೆಯುಚ್ಚೆಹೊಯ್ವಂದದ ಅಪ್ರಕಟಿತ ಕವನವೊಂದೋದೇನು ಬಯಲುಗೊಳಿಸಿದ್ದೆವೋ... ಅದಕ್ಕೆಲ್ಲ ಮುನ್ನುಡಿಯಂತೆ.. ದಶಕವೊಂದರಷ್ಟು ಹಿಂದೆ.. ಹಾಗೆ ತಲೆ ತಳೆಯದ ಖಾಚಿತ್ಯಗಳು ವರ್ತನೆಯಲ್ಲಿ ಆವರ್ತಿಸುವ ವಿದ್ಯಮಾನವನ್ನು ಬ್ಲಾಗಾಭಿವ್ಯಕ್ತಿಗೊಳಿಸಿದ್ದೆವು.. ಆಗ ಅದು ಶ್ರೀಶ್ರೀಶ್ರೀ ದುರಹಂಕಾರಿಗಳ ಮುಂಗಾಣ್ಕೆಯಾಗಿತ್ತು ಎಂದು ಈಗ ಸತ್ಯೋತ್ತರವಾಗಿ ಭಾವಿಸಲು ಒಂದು ತೊಡಕಲ್ಲದ ತೊಡಕೇನೆಂದರೆ .. ಈಗ ಪುನರಾವಲೋಕಿಸಲು ಯತ್ನಿಸಿದರೆ ಅದು ಹೀಗೆ ಬೆಳೆಯುವ ಟ್ಯೂಮರಿನ ಮೊಳಕೆ ಮಾತ್ರವಾಗಿತ್ತು ಎಂಬ ಸೂಚನೆ ಆಗಲೇ ಶ್ರೀಶ್ರೀಶ್ರೀ ದುರಹಂಕಾರಿಗಳಿಗೆ ಇದ್ದಿತು ಎನ್ನಲು ಬಲವಾದ ಆಧಾರಗಳಿದ್ದಂತೆ ಅನಿಸುವುದಿಲ್ಲ... ಎನಿವೆ.. ಏನೀಗ..?, ಎಂದರೆ, ಹೇಗೂ ಇತ್ತೀಚೆಗೆ ನಮಗೆ ಪ್ರತಿಸ್ಪಂದನೆಯ 'ಭೂತ'ವೊಂದು ಮೆತ್ತಿಕೊಂಡಿರಲಾಗಿ.. ಆವೊಂದು "ಆಧುನಿಕ ಕವಿಕಾವ್ಯಕ್ಲೀಷೆ"ಗೆ ಪ್ರತಿಧ್ವನಿ ಅಥವಾ ಸ್ಟೇಟಸ್-update ಎನ್ನುವಂತೆ "ಆಧುನಿಕೋತ್ತರ ಸಂಪ್ರದಾಯದ ಭವಿಭಾವಶ್ಲೇಷೆ"ಗಳನ್ನು ವಿಶ್ಲೇಷಿಸಿ ಸಂಶ್ಲೇಶಿಸಿ ತಮ್ಮ ಆವಾಗಾಹನೆಗೆ ತನ್ಮೂಲಕ ನೀಡುತ್ತಿದ್ದೇವೆ.. ಓಡಿಸಿಯಾದರೂ ಓಡದೇ ಓದಿ ನೋಡಿ ..! ಧನ್ಯಬಾದಗಳೊಂದಿಗೆ ಶ್ರೀದುರಹಂಕಾರಿತ್ವಕ್ಕೆ ಯಾವತ್ತು ಪರ್ಯಾಯದಲ್ಲಿ ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳು