ಗೀತೆ: ಛೈಂಯ ಛೈಂಯ
ಗೀತಕಾರ: ಗುಲ್ಜಾರ್
ಸಂಗೀತ: ಎಅರ್ ರಹಮಾನ್
ಚಿತ್ರ: ದಿಲ್ ಸೇ (೧೯೯೮)
---------------------------------------------------------------------------------------
ಎಲ್ಲ ಹಕ್ಕುಗಳೂ ಮೂಲದಲ್ಲಿನ ಕೃತಿಕಾರರು-ಹಕ್ಕುದಾರರುಗಳಿಗೇ ಸೇರಿದ್ದು.
ಈ ಪ್ರಸ್ತುತಿಯಿರುವುದು ಸೃಜನೀಯ ಅಭಿವ್ಯಕ್ತಿಯ ಅಭ್ಯಾಸದ ಭಾಗವಾಗವಷ್ಟೇ
ಹೊರತೂ ಮೂಲಕೃತಿಯ ಯಾವುದೇ ಹಕ್ಕುಗಳನ್ನು ಈ ಮೂಲಕ ಅತಿಕ್ರಮಿಸಲಲ್ಲ.
=================================================
ನೆತ್ತಿಯ ಮೇಲೆಲ್ಲಿ ಅನುರಕ್ತಿ ಛಾಯೆ ಹಾಂಗಿತ್ತ
ಪಾದಗಳಡಿಯಾಗಲ್ಲಿ ಜನ್ನತ್ತ ನಡೆದಿತ್ತ ।ಸೂಕ್ತಿ।
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ |ಪ|
ನೆತ್ತಿ ಪ್ರೇಮದಡೀ ನಡೆಸಯ್ಯ ಸೈಂಯ್ಯ
ಪಾದ ಜನ್ನತ್ತಿನಲೀ ನಡೀತಯ್ಯ |ಅನು ಪ|
ಸಖನಾರಾ ಪರಿಮಳದ್ಹಾಂಗ
ನುಡಿಮಾರು ಉಋದೂನ್ಹಾಂಗ
ಎನ್ನ ಸಂಜೆ-ರಾತ್ರಿ ಎನ್ನ ಜಗವೇ ಖಾತ್ರಿ
ಆ ಸಖನೆನ್ನ ಇನಿಯನು ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ ।೧।
ಹೂದೊಟ್ಟೆಲ್ಲಿ ತೊನೆದಿದ್ದೇನs
ಸುಗಂಧ ವಲ್ಲಿ ಕಾಣ ಸಿಲುಕಿತೇನs
ತಾಯಿತವನಾಗಿಸಿ ಧರಿಸೇನು
ಆಯತದಂದದಿ ನಿಲುಕೀತೇನs
ಆ ಸಖನೆನ್ನಾ ನಿಜ ಗುರು ಹಾಂಗ
ಅಣಿ ಮುತ್ತೆನಗೆ ವಚನವದೇ
ಅಣಿಮುತ್ತು ಮುತ್ತೆ ಎನ್ನ ವಚನ ವಚನ
ಅಣಿಮುತ್ತು ಮುತ್ತೆ ಎನ್ನ ವಚನ
ಯಾರಾಸದೃಶ ಇಬ್ಬನಿಯ ನಡೆ^†
ಪಾದದಡೀ ಫಿಋದೋಸೆ ನಡೆ
ಎಳೆ ಎಳೆ ಮೇಲೆ ಎಲೆ ಎಲೆಯ ಮೇಲೆ
ತಿಳಿ ಗಾಳಿಯಲರಸಿಹೆನಾ ಸೆಳೆಯ ನಡೆ
ನೆತ್ತಿ ಪ್ರೇಮದಡೀ ನಡೆಸಯ್ಯ ಸೈಂಯ್ಯ
ಪಾದ ಜನ್ನತ್ತಿನಲೀ ನಡೀತಯ್ಯ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ ।೨।
ನಾನಾ ಗುಂಗಿನ ಚೊಂಚೇನು
ಆ ಇರುಳೂ ಬೆಳಕಿನ ಹೊಂಚೇನು
ತುಂಟಾಡುವ ಚಂಚಲ ಕುಂಚವೇನು
ನಾ ರಂಗ ರೂಪಕs ಹೊಂಜೇನು
ಯಾವ ಚಿತ್ತಕ ಪ್ರೇಮದ ಛಾಯಾವಳೀ
ಆ ಪಾದದಿ ನಾಕವೆ ನಡಾವಳೀss
ಸಂಜಿ-ರಾತ್ರಿ ಎನ್ನ ಜಗವೆ ಖಾತ್ರಿ
ಆ ಸಖನೆನ್ನಾ ಇನಿಯನೆ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ
ನಡೆಸಯ್ಯ ಸೈಯ್ಯ ಸೈಂಯಾ ಸಯ್ಯಾ ।೩।
=============================================================
ನೋಡಿ:
1) https://blog.chandrahasa.com/archives/3168
2) https://groups.google.com/g/rec.music.indian.misc/c/J04dtxkIQ48
3) https://gulzar101.blogspot.com/2011/12/chhaiyya-chhaiyya-dil-se.html
4) https://www.youtube.com/watch?v=znNAdZdtbFE
†) "ಮುಂಜಾವತೊಟ್ಟು ಇರು ಹಂಗ ಬಿಟ್ಟು ಬರಿ ಹಾಂಗ ತೂಗತsದೋ..."
†) "ನಸುಕಿನ ಕಿರಣಗಳಿಂದಲಿದೆ ಮಂಜಿನ ಹನಿಗಳಿಗೆ ಲೀನವಾಗುವಿಕೆಯ ತಾಲೀಮು..."
=============================================================
ಗುಲ್ಜಾರ ಸೂಫೀ ಕಲಂಮಿನ ಆಯತನ ವಾಂ ಮಂತ್ರಪುಷ್ಪವೆ ಸೈಯ್ಯ..!
ಸಹೃದಯಿ ಕಾವ್ಯಾಸ್ವಾದ ಸಾಧಕರೇ.,
ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳ ಚಿತ್ತಭಿತ್ತಿ-
ಯ ಹಿನ್ನೆಲೆಯಲ್ಲಿರುವುದು ಟ್ಯೂಬ್ಲೈಟಿನ ಪ್ರಭಾವಳಿಯೇ!?!
ವೇದಮಂತ್ರಗಳ ಪುಷ್ಪಗಳನ್ನು ವ್ಯಾಪಕವಾಗಿ ಕಿವಿಯ ಮೇಲೆ ಇರಿಸುವ
ವಾತಾವರಣದಲ್ಲೇ ಬೆಳೆದ ಇತಿ ಶ್ರೀಗಳಿಗೆ
ಪ್ರಾಯಶಃ ಅಂಥಾ 'ಭಾಗ್ಯ'ವಿಲ್ಲದೆಯು ಬೆಳೆಬೆಳೆದಿರಬಹುದಾದ
ಶ್ರೀಮನ್ಮಹಾ ರಾಜೇಂದ್ರರೇ
"ಚಂದ್ರ ನೀರ ಹೂ" ಎಂದು ಪ್ರಸಾದಿಸಿದ ಮೇಲಷ್ಟೇ
"ಚಃದ್ರಮಾವಾ ಅಪಾಂ ಆಯತನಂ" ಎಂಬ
ಮಂತ್ರಪುಷ್ಪದ ಕಾವ್ಯಾಯತನವು ಅಪ್ಯಾಯಮಾನವಾಂಗಿದ್ದು!
ಅದೇ ಗುಂಗಿನ ಭೃಂಗ ಗುಲ್ಜಾರನ ತೋಟದಲ್ಲಿ
"ಹೂವೇನು ಅರಳಿಹ ಠಾವೇನು
ಮೂಸುವೆನಾ ವಾಸನೆಯೇನು
ತಾಯಿತದಂತೆ ಧರಿಸುವೆನು
ಆಯತದೀ ನಿಲುಕೀತೇನು"
ಎಂದು ಬಂದದ್ದು... ಛೇ...
ಬರೀ ಅನು-ವಾದನ ಕಲ್ಪನಾ-ವಿಲಾಸವೇ..?
ಮಕ್ಕೀ-ಕಾ-ಮಕ್ಕೀಯಲ್ಲ ಎಂದರೆ
ಉಘೇ ಉಘೇ ಎಂಬವರು
ಭೃಂಗಕ್ಕ-ಭೃಂಗ ಎಂದರೂ
ವ್ರತಭಂಗವಾದಂತೆ ಮತ್ತೆ
ಮಕ್ಕುಗಿವುದಿಲ್ಲ ಎಂದೇನು ಗ್ಯಾರಂಟಿ!?!
ಹೋಗಲಿ, ಟ್ಯೂಬ್ ಲೈಟ್ ಕೊನೆಗೂ ಹತ್ತಿತೇ ಎಂದು ನೋಡಿದರೆ
ಹತ್ತಿದ್ದೂ ಸಹ ವೊಲ್ಟೇಜು ಪೂರ್ತಿಯಿರದೇ ತುಸು ಮಂದವಿರುತ್ತದೆ!
ಮಕ್ಕಳಾಟದಿ "ಸುಬಃ ಶಾಮ ರಾತ್ ಮೆರೆ ಖಾಯೆ ಲಾತ್ ವೊ
ಯಾರು ಮೆರಾ ಸೈಯ್ಯಾ ಸೈಯ್ಯಾ..!" ಎಂದು ಅಣಕುವಾಡು ಗುನುಗಿ
ಛೈಯ್ಯ ಛೈಯ್ಯ ಎಂದು ಕುಣಿದು ದಶಕವಾದ ಮೇಲೆ
ಅದರಲ್ಲಿ ರಹಮಾನನ ಮೇಘರಾಗಮಾಲೆಗಳ ಬಂಡಿಯ ಮಾನ್ಯತೆ ಮನ ದಟ್ಟಾದದ್ದು...
ಮತ್ತೊಂದು ದಶಕವಾಗುವ ಹೊತ್ತಿಗೆ ಅದರ ಸುಖೀ ಗಾಯಕಿಯ ಹುಕಿ ಹುದುಗಿ ಬಂದಿದ್ದು...
ಮತ್ತೊಂದರ್ಧ ದಶಕವಾಗುವಾಗ ತತ್ಸಂಬಂಧ ಗುಲ್ಜಾರನ ಸಂದರ್ಶನಗಳ ಸಂದರ್ಶಿಸಿದ್ದು...
ನಿಧಾನ ನಮಗೆ ಈ ಸಾಲುಗಳಲ್ಲಿ ಇನ್ನೇನೇನೋ ಇದ್ದಿರಲಿಕ್ಕೇ ಸೈಯ್ಯಾ! ಎನಿಸ ತೊಡಗಿದ್ದು..
ಇವತ್ತು ಧಿಗ್ಗನೆ ಎದ್ದು ಯಾವ್ಯಾವುದೋ ಗುಂಗು ಗುಂಗುಗಳಲ್ಲಿ ಈ ಹಾಡಿನ ರಂಗು ರಂಗಾದ
ಪಲಕು ಪಲಕುಗಳ ಪದರ ಪದರಗಳು ಲೇಯರ್ಡ್ ಕೇಕಿನಂತೆ ಅನುವಾದನ ವ್ಯಾಸಪೀಠಾರೋಹಿಸಿದ್ದು...
ಸೊ,
ಇದನು ಮೂಸಿ ಮೂಸಿ ನಿಮ್ಮ ಎದೆದುಂಬಿದನ್ನು
ನೀವು ಸಹ ನಮ್ಮತ್ತ ಪುನಃ ಸೂಸಿ ಬಿಡಿ!
--ಎಂದು ಇತಿ ನಿಂಮ
ಶ್ರೀ ದುರಃಂ..!