-:ಮೇಘದ್ಯೂತ:-
#ಮಿನಿಗಾಥೆ #worldflay
ಅಭಿನವಗಾಳಿದಾಸನ ಚಿತ್ತಭಿತ್ತಿಯಲಿ ಹಾಗೊಮ್ಮೆ
ಬಿರುಬರಗಾಲಮಧ್ಯೇ ಮೋಡಗವಿದ ವಾತಾವರಣವಿತ್ತು....
ಬದಲಾದ ಹವಾಮಾನದಲ್ಲಿ ಸಂದೇಶಘರ್ಭಿತ ಮೇಘ
ದ್ಯೂತಕ್ಕೂ ಮುನ್ನವೇ ಹಠಾತ್ ಸ್ಪೋಟಿಸಿಬಿಟ್ಟಿತು!
ಆಭಿಸರಣಕೆಗೆ ಮುನ್ನವೇ ಪುಷ್ಪಪ್ರೇಮಿ ಭೃಂಗರಾಜನ ದೇಹ
ಭೋರ್ಗರೆದ ಬರ್ಬರ ರಸಧಾರೆಯಲಿ ಕೊಚ್ಚಿ ಹೋಯಿತು.
ಭೃಂಗನ ಬೆನ್ನೇರಿ ಬಂದ ವಿಧಿವಿಲಾಸದಲಿ ವಿಹಲ್ವಿ ಪುಷ್ಪ
ನರಳಿ ನರಳಿ ಮತ್ತರಳದಂತೆ ಸುರುಳಿ ಸುಳಿವಿಲ್ಲವಾದಳು.
ಈ ಮೆಲೊಡ್ರಾಮಾದಲ್ಲೀಗ ಏನು ಮಾಯಾಮಾಂತ್ರಿಕ
ವಾಸ್ತವ ತಲೆಕೆಳಗು ತಂತ್ರ ಹೂಡಿದರೂ ಅಷ್ಟೇ...
ವರ್ಧಂತಿಯನ್ನು ವದಂತಿ ಎಂಬಂತೆ ಜಯಂತಿಯೇ
ಓ ಇನಿಯಾ ಎಂದು ಅನಂತನಾಗುವತ್ತ ನಡೆದರೂ ಅಷ್ಟೇ...
ಪ್ರಶ್ನೆ ಹಾಗೇ ಉಳಿಯುತ್ತದೆ:
"bodyಹೋದ soulನಿಂದ ಹೂವು ಅರಳಬಲ್ಲದೆ..?!"
------------------------------------------------------------------------------------
ಜಗತ್ತಿನಲೆಂದೂ ಎಂದೂ ಯಾವ ಎಐ ಬಂದರೂ ಅಷ್ಟೇ
ಅವುಗಳಿಗೇನೇ ತಲೆಕೆಳಗು ಪ್ರಾಂಪ್ಟಿಂಜಿನೀರು ಕುಡಿಸಿದರೂ ಅಷ್ಟೇ
ಅವು ಇಂಥ ಮಿನಿ world-flay ಒಂದನೆಂದೂ ಬರೆದುಕೊಡಲಾರವು
ಅಂತಂತಂದು ಶ್ರೀಶ್ರೀಶ್ರೀ ಮೂರ್ಶ್ರೀ ನಾವುಗಳಾದ ನಾವುಗಳು
ಈ ಮೂಲಕ ಶರಂಪರ ಪರಾಶರಪರಂಪರಾಪರಪರ ಪರಪರ
ಷರಾ ಬರೆದಿಡುತಿದ್ದೇವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ